ಹಿಂದುತ್ವವಾದಿಗಳಿಂದ ದಲಿತ ಯುವಕನ ವ್ಯವಸ್ಥಿತ ಕೊಲೆ ! ಸೂಕ್ತ ತನಿಖೆಗೆ ಎಸ್ ಡಿ ಪಿ ಐ ಒತ್ತಾಯ , ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ!
ಹಿಂದುತ್ವವಾದಿಗಳಿಂದ ದಲಿತ ಯುವಕನ ವ್ಯವಸ್ಥಿತ ಕೊಲೆ ! ಸೂಕ್ತ ತನಿಖೆಗೆ ಎಸ್ ಡಿ ಪಿ ಐ ಒತ್ತಾಯ , ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ!
ಬ್ರೇಕಿಂಗ್ ನ್ಯೂಸ್ ಮಂಗಳೂರು ವರದಿ
ಸುಬ್ರಹ್ಮಣ್ಯ: ಮಾ :02 ,ದಲಿತ ಯುವಕ ಜಯಪ್ರಕಾಶ್ ಎಂಬವನು ಗೌಡ ಸಮುದಾಯದ ಹುಡುಗಿಯನ್ನು ಪ್ರೀತಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸುಬ್ರಹ್ಮಣ್ಯ ಪೋಲೀಸ್ ಠಾಣೆ ವ್ಯಾಪ್ತಿಯ ಗುಂಡ್ಯ ಸಮೀಪದ ಕುಮಾರ ಧಾರ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿರುವ ಪ್ರಕರಣವನ್ನು ಆಕಸ್ಮಿಕ ಮರಣ ಎಂದು ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮವನ್ನು ಖಂಡಿಸಿ, ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಇಂದು ದ.ಕ ಜಿಲ್ಲೆಯ ಎಸ್ ಡಿ ಪಿ ಐ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷರಾದ ಆನಂದ ಮಿತ್ತಬೈಲ್, ಪ್ರ. ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮತ್ತು ಮೃತರ ಕುಟುಂಬಸ್ಥರು ಉಪಸ್ಥಿತರಿದ್ದರು.
Comments
Post a Comment