ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ
❗ಕೈ ಹಿಡಿದ ಪತ್ನಿಯ ಕೈ, ಕಾಲು ಕತ್ತರಿಸಿ ಕೊಲೆಗೆ ಯತ್ನ- ಹೆರ್ಮುಂಡೆಯಲ್ಲೊಂದು ಪೈಶಾಚಿಕ ಕೃತ್ಯ !
ಕಾರ್ಕಳ, ಫೆ 01 : ಕಳೆದ ಒಂದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವ್ಯಕ್ತಿಯೊರ್ವ ತನ್ನ ಪತ್ನಿಯ ಕೊಲೆಗೆ ಪ್ರಯತ್ನಿಸಿದ ಘಟನೆ ಹೆರ್ಮುಂಡೆಯ ಕುಕ್ಕುದಡಿಯಲ್ಲಿ ನಡೆದಿದೆ.
ಘಟನೆಯಿಂದ ತನ್ನ ಎರಡು ಕೈಗಳು ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಜೀವನ್ಮರಣ ಸ್ಥಿತಿಯಲ್ಲಿರುವ ಮಹಿಳೆ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದಾಳೆ.
ಹೆರ್ಮುಂಡೆ ಕರ್ಜಿಪಲ್ಕೆ ಮನೆಯ ಶ್ರೀಧರ್ ಪೂಜಾರಿ ಮತ್ತು ಸುಗುಣ ಪೂಜಾರಿ ದಂಪತಿಗಳ ಇಬ್ಬರು ಮಕ್ಕಳ ಪೈಕಿ ಅನುಶ್ರೀ (23) ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಬದುಕಿದವಳು.
ದೂರದ ಸಂಬಂಧಿಯಾಗಿರುವ ಹೆರ್ಮುಂಡೆಯ ಪಟ್ರಬೆಟ್ಟು ಭೋಜ ಪೂಜಾರಿ ಹಾಗೂ ಜಯಂತಿ ದಂಪತಿಗಳ ಮಗ ಸಂತೋಷ್ ಪೂಜಾರಿ( 27) ಪ್ರಕರಣದ ಆರೋಪಿ.
*ತಲವಾರು ಬೆದರಿಕೆಯೊಂದಿಗೆ ನಡೆದಿತ್ತು ವಿವಾಹ!*
ಸಂತೋಷ್ ಪೂಜಾರಿ ಕಳೆದ 10 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಮುಂಬಯಿಗೆ ತೆರಳಿದ್ದನು. ಥಾಣೆ ಬೈದರ್ ಮಿರಾರೋಡ್ ಮಂತ್ರ ಲಾಡ್ಜ್ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾನೆ.
ಅನುಶ್ರೀ ನಿಟ್ಟೆಯಲ್ಲಿ ಡಿಪ್ಲೋಮಾ ಇಂಜಿನಿಯರ್ ಮುಗಿಸಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ , ದೂರದ ಸಂಬಂಧಿ ಸಂತೋಷ್ ಪೂಜಾರಿಯನ್ನು ಪ್ರೀತಿಸಲು ಶುರುಮಾಡಿದನು.
ಈ ನಡುವೆ ಆಕೆಗೆ ಆತನ ಬಗ್ಗೆ ಇಷ್ಟ ಇರಲಿಲ್ಲ ಎಂಬ ವಿಚಾರ ತಿಳಿದ ಸಂತೋಷ್ ಪೂಜಾರಿ ಅದೊಂದು ದಿನ ರಾತ್ರಿ ಆಕೆಗೆ ಮನೆಗೆ ಹೋಗಿ ತಲವಾರು ಝಳಪಿಸುತ್ತಾ ಮನೆಯೊಳಗೆ ಅಕ್ರಮ ಪ್ರವೇಶಗೈದು, ಆಕೆಯನ್ನು ನನ್ನೊಂದಿಗೆ ವಿವಾಹ ಮಾಡಿ ಕೊಡದೇ ಹೋದಲ್ಲಿ ನಿಮ್ಮನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ.
ಆ ಘಟನಾವಳಿಯಿಂದ ಹೆದರಿ, ಮಾನಸಿಕವಾಗಿ ನೊಂದಿದ್ದ ಮನೆ ಮಂದಿ ಅನುಶ್ರೀಯಳನ್ನು ಧಾರೆ ಎರೆದು ಕೊಡುವ ವಾಗ್ದಾನ ನೀಡಿದರಂತೆ.
*ಮನೆಯಲ್ಲಿ ನಡೆದಿತ್ತು ವಿವಾಹ*
ಈ ಎಲ್ಲಾ ಬೆಳವಣಿಗೆಯ ಬಳಿಕ ಇತ್ತಂಡ ಮನೆ ಮಂದಿಯರು ಮಾತುಕತೆ ನಡೆಸಿದ ಪರಿಣಾಮವಾಗಿ 2017 ಜನವರಿ ೬ರಂದು ಕಾರ್ಕಳ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅನುಶ್ರೀ-ಸಂತೋಷ್ ಪೂಜಾರಿಯ ವಿವಾಹ ನೋಂದಣಿ ನಡೆದಿತ್ತು.
2017 ಮಾರ್ಚ್ 23 ರಂದು ಅನುಶ್ರೀಯ ಅಜ್ಜಿಯ ಮನೆಯಲ್ಲಿಯೇ ಶಾಸ್ತೋಕ್ತವಾಗಿ ಅನುಶ್ರೀ ಮತ್ತು ಸಂತೋಷ್ ಪೂಜಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಈ ನಡುವೆ ಸಂತೋಷ್ ಪೂಜಾರಿ ಮುಂಬಯಿಗೆ ಹೋದರೆ ಪತ್ನಿ ಅನುಶ್ರೀ ತವರು ಮನೆಯಲ್ಲಿಯೇ ಉಳಿದುಬಿಟ್ಟಳು.
*ಡಿಪ್ಲೋಮಾ ಇಂಜಿನಿಯರ್ ಆಗಿರುವ ಅನುಶ್ರೀ*
ಉದ್ಯೋಗ ಅರಸಿಕೊಂಡು ಮತ್ತೇ ಬೆಂಗಳೂರಿಗೆ ತೆರಳಿದ್ಳು. ಕೆಲ ತಿಂಗಳು ಅಲ್ಲಿ ಕೆಲಸ ಮಾಡಿಕೊಂಡು ಇದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಊರಿಗೆ ಕರೆಸಿಕೊಂಡಿದ್ದ ಪತಿ ಸಂತೋಷ್ ಪೂಜಾರಿ ಅಲ್ಲಂದ ಮುಂಬಯಿಗೆ ಕರೆದುಕೊಂಡು ಹೋಗಿದದ್ದನು.
ಅವರಿಬ್ಬರ ನಡುವೆ ದಾಂಪತ್ಯ ಬಿರುಕು ಮೂಡುತ್ತಿದ್ದಂತೆ ಅನುಶ್ರೀಯ ತಾಯಿ ಸುಗುಣ ಪೂಜಾರಿ ಮುಂಬಯಿಗೆ ತೆರಳಿ ಮಗಳ ದಾಂಪತ್ಯ ಬಂಧನ ಗಟ್ಟಿಗೊಳಿಸಲು ಮುಂದಾಗಿದ್ದರು. ಆದರೆ ಅವರಿಬ್ಬರ ನಡುವೆ ಬಾಂಧವ್ಯ ವೃದ್ಧಿಸದೆ ಹೋದುದರಿಂದ ಅನುಶ್ರೀ ತನ್ನ ತಾಯಿಯೊಂದಿಗೆ ಊರಿಗೆ ಹಿಂತಿರುಗಿ ತವರು ಮನೆ ಸೇರಿದಳು.
*ಕೊಲೆಗೆ ವ್ಯವಸ್ಥಿತ ಪ್ರಯತ್ನ*
ಜನವರಿ 27 ಶನಿವಾರ ಸಂಜೆ 5.45 ರ ವೇಳೆಗೆ ಅನುಶ್ರೀ ಕಾರ್ಕಳದಿಂದ ತೆಳ್ಳಾರಿಗೆ ಖಾಸಗಿ ಬಸ್ಸಿನಲ್ಲಿ ಬಂದು ಇಳಿಸಿದ್ದಾಳೆ. ಹೈಸ್ಕೂಲ್ ಎದುರಿನ ಕಾಲು ದಾರಿ ಮಾರ್ಗವಾಗಿ ಬಲಾಜೆ ತೋಟವಾಗಿ ಸ್ವರ್ಣ ನದಿ ದಾಟಿ ಹೆರ್ಮಂಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಆರೋಪಿ ಪತಿ ಸಂತೋಷ್ ಪೂಜಾರಿ ಏಕಾಏಕಿಯಾಗಿ ಮೇಲೇರಗಿದ್ದಾನೆ.
ಬಿಡಿಸಿಕೊಳ್ಳಲು ಅನುಶ್ರೀ ಮುಂದಾದಾಗ ಅದಕ್ಕೆ ಅವಕಾಶ ನೀಡದೇ ಇದ್ದ ಆರೋಪಿ ತನ್ನಲ್ಲಿದ್ದ ಕತ್ತಿಯಿಂದ ಆಕೆಯ ಎರಡು ಕೈಗಳನ್ನು ಹಾಗೂ ಎರಡು ಕಾಲುಗಳನ್ನು ಕಡಿದು ಹಾಕಿದ್ದಾನೆ.
ವಿವಾಹ ವಿಚ್ಚೇದನೆ ನೀಡುವ ಬದಲಾಗಿ ನಿನ್ನನ್ನೇ ಯಮಲೋಕಕ್ಕೆ ಕಳುಹಿಸುತ್ತಿದ್ದೇನೆ ಎಂದು ಪತಿ ಸಂತೋಷ್ ಪೂಜಾರಿ ಕಿರುಚಾಡಿಕೊಂಡಿರುವ ವಿಚಾರವನ್ನು ಜೀವನ್ಮರಣ ಸ್ಥಿತಿಯಲ್ಲಿರುವ ಅನುಶ್ರೀ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಕಾರ್ಕಳ, ಫೆ 01 : ಕಳೆದ ಒಂದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವ್ಯಕ್ತಿಯೊರ್ವ ತನ್ನ ಪತ್ನಿಯ ಕೊಲೆಗೆ ಪ್ರಯತ್ನಿಸಿದ ಘಟನೆ ಹೆರ್ಮುಂಡೆಯ ಕುಕ್ಕುದಡಿಯಲ್ಲಿ ನಡೆದಿದೆ.
ಘಟನೆಯಿಂದ ತನ್ನ ಎರಡು ಕೈಗಳು ಹಾಗೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಜೀವನ್ಮರಣ ಸ್ಥಿತಿಯಲ್ಲಿರುವ ಮಹಿಳೆ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದಾಳೆ.
ಹೆರ್ಮುಂಡೆ ಕರ್ಜಿಪಲ್ಕೆ ಮನೆಯ ಶ್ರೀಧರ್ ಪೂಜಾರಿ ಮತ್ತು ಸುಗುಣ ಪೂಜಾರಿ ದಂಪತಿಗಳ ಇಬ್ಬರು ಮಕ್ಕಳ ಪೈಕಿ ಅನುಶ್ರೀ (23) ಘಟನೆಯಲ್ಲಿ ಕೂದಲೆಳೆಯ ಅಂತರದಲ್ಲಿ ಬದುಕಿದವಳು.
ದೂರದ ಸಂಬಂಧಿಯಾಗಿರುವ ಹೆರ್ಮುಂಡೆಯ ಪಟ್ರಬೆಟ್ಟು ಭೋಜ ಪೂಜಾರಿ ಹಾಗೂ ಜಯಂತಿ ದಂಪತಿಗಳ ಮಗ ಸಂತೋಷ್ ಪೂಜಾರಿ( 27) ಪ್ರಕರಣದ ಆರೋಪಿ.
*ತಲವಾರು ಬೆದರಿಕೆಯೊಂದಿಗೆ ನಡೆದಿತ್ತು ವಿವಾಹ!*
ಸಂತೋಷ್ ಪೂಜಾರಿ ಕಳೆದ 10 ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಮುಂಬಯಿಗೆ ತೆರಳಿದ್ದನು. ಥಾಣೆ ಬೈದರ್ ಮಿರಾರೋಡ್ ಮಂತ್ರ ಲಾಡ್ಜ್ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದಾನೆ.
ಅನುಶ್ರೀ ನಿಟ್ಟೆಯಲ್ಲಿ ಡಿಪ್ಲೋಮಾ ಇಂಜಿನಿಯರ್ ಮುಗಿಸಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ , ದೂರದ ಸಂಬಂಧಿ ಸಂತೋಷ್ ಪೂಜಾರಿಯನ್ನು ಪ್ರೀತಿಸಲು ಶುರುಮಾಡಿದನು.
ಈ ನಡುವೆ ಆಕೆಗೆ ಆತನ ಬಗ್ಗೆ ಇಷ್ಟ ಇರಲಿಲ್ಲ ಎಂಬ ವಿಚಾರ ತಿಳಿದ ಸಂತೋಷ್ ಪೂಜಾರಿ ಅದೊಂದು ದಿನ ರಾತ್ರಿ ಆಕೆಗೆ ಮನೆಗೆ ಹೋಗಿ ತಲವಾರು ಝಳಪಿಸುತ್ತಾ ಮನೆಯೊಳಗೆ ಅಕ್ರಮ ಪ್ರವೇಶಗೈದು, ಆಕೆಯನ್ನು ನನ್ನೊಂದಿಗೆ ವಿವಾಹ ಮಾಡಿ ಕೊಡದೇ ಹೋದಲ್ಲಿ ನಿಮ್ಮನ್ನೆಲ್ಲ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ.
ಆ ಘಟನಾವಳಿಯಿಂದ ಹೆದರಿ, ಮಾನಸಿಕವಾಗಿ ನೊಂದಿದ್ದ ಮನೆ ಮಂದಿ ಅನುಶ್ರೀಯಳನ್ನು ಧಾರೆ ಎರೆದು ಕೊಡುವ ವಾಗ್ದಾನ ನೀಡಿದರಂತೆ.
*ಮನೆಯಲ್ಲಿ ನಡೆದಿತ್ತು ವಿವಾಹ*
ಈ ಎಲ್ಲಾ ಬೆಳವಣಿಗೆಯ ಬಳಿಕ ಇತ್ತಂಡ ಮನೆ ಮಂದಿಯರು ಮಾತುಕತೆ ನಡೆಸಿದ ಪರಿಣಾಮವಾಗಿ 2017 ಜನವರಿ ೬ರಂದು ಕಾರ್ಕಳ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅನುಶ್ರೀ-ಸಂತೋಷ್ ಪೂಜಾರಿಯ ವಿವಾಹ ನೋಂದಣಿ ನಡೆದಿತ್ತು.
2017 ಮಾರ್ಚ್ 23 ರಂದು ಅನುಶ್ರೀಯ ಅಜ್ಜಿಯ ಮನೆಯಲ್ಲಿಯೇ ಶಾಸ್ತೋಕ್ತವಾಗಿ ಅನುಶ್ರೀ ಮತ್ತು ಸಂತೋಷ್ ಪೂಜಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಈ ನಡುವೆ ಸಂತೋಷ್ ಪೂಜಾರಿ ಮುಂಬಯಿಗೆ ಹೋದರೆ ಪತ್ನಿ ಅನುಶ್ರೀ ತವರು ಮನೆಯಲ್ಲಿಯೇ ಉಳಿದುಬಿಟ್ಟಳು.
*ಡಿಪ್ಲೋಮಾ ಇಂಜಿನಿಯರ್ ಆಗಿರುವ ಅನುಶ್ರೀ*
ಉದ್ಯೋಗ ಅರಸಿಕೊಂಡು ಮತ್ತೇ ಬೆಂಗಳೂರಿಗೆ ತೆರಳಿದ್ಳು. ಕೆಲ ತಿಂಗಳು ಅಲ್ಲಿ ಕೆಲಸ ಮಾಡಿಕೊಂಡು ಇದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಊರಿಗೆ ಕರೆಸಿಕೊಂಡಿದ್ದ ಪತಿ ಸಂತೋಷ್ ಪೂಜಾರಿ ಅಲ್ಲಂದ ಮುಂಬಯಿಗೆ ಕರೆದುಕೊಂಡು ಹೋಗಿದದ್ದನು.
ಅವರಿಬ್ಬರ ನಡುವೆ ದಾಂಪತ್ಯ ಬಿರುಕು ಮೂಡುತ್ತಿದ್ದಂತೆ ಅನುಶ್ರೀಯ ತಾಯಿ ಸುಗುಣ ಪೂಜಾರಿ ಮುಂಬಯಿಗೆ ತೆರಳಿ ಮಗಳ ದಾಂಪತ್ಯ ಬಂಧನ ಗಟ್ಟಿಗೊಳಿಸಲು ಮುಂದಾಗಿದ್ದರು. ಆದರೆ ಅವರಿಬ್ಬರ ನಡುವೆ ಬಾಂಧವ್ಯ ವೃದ್ಧಿಸದೆ ಹೋದುದರಿಂದ ಅನುಶ್ರೀ ತನ್ನ ತಾಯಿಯೊಂದಿಗೆ ಊರಿಗೆ ಹಿಂತಿರುಗಿ ತವರು ಮನೆ ಸೇರಿದಳು.
*ಕೊಲೆಗೆ ವ್ಯವಸ್ಥಿತ ಪ್ರಯತ್ನ*
ಜನವರಿ 27 ಶನಿವಾರ ಸಂಜೆ 5.45 ರ ವೇಳೆಗೆ ಅನುಶ್ರೀ ಕಾರ್ಕಳದಿಂದ ತೆಳ್ಳಾರಿಗೆ ಖಾಸಗಿ ಬಸ್ಸಿನಲ್ಲಿ ಬಂದು ಇಳಿಸಿದ್ದಾಳೆ. ಹೈಸ್ಕೂಲ್ ಎದುರಿನ ಕಾಲು ದಾರಿ ಮಾರ್ಗವಾಗಿ ಬಲಾಜೆ ತೋಟವಾಗಿ ಸ್ವರ್ಣ ನದಿ ದಾಟಿ ಹೆರ್ಮಂಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಆರೋಪಿ ಪತಿ ಸಂತೋಷ್ ಪೂಜಾರಿ ಏಕಾಏಕಿಯಾಗಿ ಮೇಲೇರಗಿದ್ದಾನೆ.
ಬಿಡಿಸಿಕೊಳ್ಳಲು ಅನುಶ್ರೀ ಮುಂದಾದಾಗ ಅದಕ್ಕೆ ಅವಕಾಶ ನೀಡದೇ ಇದ್ದ ಆರೋಪಿ ತನ್ನಲ್ಲಿದ್ದ ಕತ್ತಿಯಿಂದ ಆಕೆಯ ಎರಡು ಕೈಗಳನ್ನು ಹಾಗೂ ಎರಡು ಕಾಲುಗಳನ್ನು ಕಡಿದು ಹಾಕಿದ್ದಾನೆ.
ವಿವಾಹ ವಿಚ್ಚೇದನೆ ನೀಡುವ ಬದಲಾಗಿ ನಿನ್ನನ್ನೇ ಯಮಲೋಕಕ್ಕೆ ಕಳುಹಿಸುತ್ತಿದ್ದೇನೆ ಎಂದು ಪತಿ ಸಂತೋಷ್ ಪೂಜಾರಿ ಕಿರುಚಾಡಿಕೊಂಡಿರುವ ವಿಚಾರವನ್ನು ಜೀವನ್ಮರಣ ಸ್ಥಿತಿಯಲ್ಲಿರುವ ಅನುಶ್ರೀ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
Comments
Post a Comment